Thursday, May 28, 2009

ಆಶಾವಾದ...

ಸ್ನೇಹಿತನೊಬ್ಬ ಈ-ಮೇಲ್ ನಲ್ಲಿ ಕಳಿಸಿದ್ದು...
ಎರಡು ಗಂಡು ಕತ್ತೆಗಳು ಪರಸ್ಪರ ಮಾತನಾಡಿಕೊಳ್ಳುತ್ತಿರುತ್ತವೆ:

ಒಂದು ಕತ್ತೆ: "ಗೆಳೆಯ, ನನ್ನ ಯಜಮಾನ ನನಗೆ ವಿಪರೀತ ಹೊಡೆದು ಹಿಂಸೆ ಕೊಡುತ್ತಾನೆ."
ಎರಡನೆ ಕತ್ತೆ: "ಹಾಗಿದ್ದರೆ ನೀನು ಓಡಿ ಹೋಗಬಾರದೇಕೆ?"
ಮೊದಲ ಕತ್ತೆ: "ಓಡಿ ಹೋಗಬಹುದಿತ್ತು, ಆದರೆ ಇಲ್ಲಿ ನನಗೆ ಉತ್ತಮ ಭವಿಷ್ಯವಿದೆ... ಯಜಮಾನನ ಸುಂದರ ಮಗಳು ತುಂಟತನ ಮಾಡಿದಾಗಲೆಲ್ಲ ಯಜಮಾನ ಅವಳಿಗೆ ಹೇಳುತ್ತಿರುತ್ತಾನೆ - 'ನಿನ್ನ ಮದುವೆ ಕತ್ತೆ ಜೊತೆ ಮಾಡುತ್ತೇನೆ...!' ಎಂದು. ನಾನು ಅದೇ ಆಶಾವಾದದಿಂದ ಇಲ್ಲಿಯೇ ಇದ್ದೇನೆ."
'
ಆಶಾವಾದಿಯಾಗಿರೋದ್ರಿಂದ ನಮ್ಮ ಭವಿಷ್ಯ ಉತ್ತಮವಾಗದೆ ಇರಬಹುದು. ಆದರೆ ಅದು ಸದ್ಯದ ನಮ್ಮ ಕಷ್ಟವನ್ನು ಇನ್ನಷ್ಟು ಸಹ್ಯವಾಗಿಸುತ್ತೆ.


ಆಶಾವಾದಿತನ ಅಂದ್ರೆ ಇದೇ ಇರಬಹುದೇನೋ :)

'

16 comments:

  1. ನಾವೂ ಆಶಾವಾದಿಯಾಗಿರೋಣ

    ReplyDelete
  2. ಉಮೇಶ್ ಸರ್,

    ಖಂಡಿತ..ಇದನ್ನು ನಾನಂತೂ ಪಾಲಿಸುತ್ತೇನೆ..

    ReplyDelete
  3. @ಸತ್ಯನಾರಾಯಣ ಸರ್,
    ಹೌದು, ನಾವೂ ಆಶಾವಾದಿಗಳಾಗಿದ್ದರೇನೇ ಬದುಕು ಸಹನೀಯ ಅನಿಸುವುದು. ಪ್ರತಿಕ್ರಿಯೆಗೆ ವಂದನೆಗಳು.

    @ಶಿವು ಸರ್,
    ನನ್ನ ಅನಿಸಿಕೆಗೆ ಧ್ವನಿಗೂಡಿಸಿದ್ದಕ್ಕೆ ಧನ್ಯವಾದಗಳು.

    ReplyDelete
  4. ನಮ್ ಮ್ಯಾನೇಜರ್ ಒಂದ್ಸಾರಿನು ಹೀಗೆ ಹೇಳಿಲ್ಲ :(

    ReplyDelete
  5. @ಶಿವಪ್ರಕಾಶ್,

    ಇವತ್ತಲ್ಲ ನಾಳೆ ಹೇಳಬಹುದು.. ಆಶಾವಾದಿಯಾಗಿರಿ :)

    ReplyDelete
  6. ಆ ಕತ್ತಿಗೂ ಎಂಥಾ ಆಶಾ ನೋಡರಿ...ನೀವು ನನ್ನ ಬ್ಲಾಗಗೂ ಭೇಟಿಕೊಡ್ರಿ..www.usdesai.blogspot.com

    ReplyDelete
  7. @ಉಮೇಶ್ ದೇಸಾಯಿ ಯವರೇ,

    ಆಶಾ ಯಾರಿಗೆ ಇರೂದಿಲ್ಲ ಹೇಳ್ರೀ.. ಅದು ಇರೋದ್ರಿಂದೆನೇ ಬದುಕು ನಡೀತಾ ಅದ ಅಲ್ರೀ..
    ಖಂಡಿತ ನಿಮ್ ಬ್ಲಾಗಿಗೆ ಭೇಟಿ ಕೊಡತೇನ್ರೀ.. ಧನ್ಯವಾದಗಳು :)

    ReplyDelete
  8. ಹೌದು ಆಶಾವಾದಿತನ ಒಳ್ಳೆಯದು . ಅದು ಪ್ರಸ್ತುತ ಆರ್ಥಿಕ ಪರಿಸ್ಥಿತಿಯಲ್ಲಿ ಅದು ಬಹಳ ಮುಖ್ಯ .

    ReplyDelete
  9. @ರೂಪಾರವರೆ,

    ಹೌದು, ಸದ್ಯದ ಪರಿಸ್ಥಿತಿಲಿ ಆಶಾವಾದಿಯಾಗಿರೋದ್ರಿಂದ ನಮ್ಮ ಮನೋಸ್ಥೈರ್ಯ ಹೆಚ್ಚುವುದರಲ್ಲಿ ಸಂದೇಹವಿಲ್ಲ. ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  10. ಛೇ, ಆ ಕತ್ತೆಗೆ ಇರುವಷ್ಟು ಆಶಾವಾದ ಮನುಜರಾದ ನಮಗಿಲ್ಲವಲ್ಲ. ಇರಲಿ, ತಮಾಷೆಯಾಗಿದೆ

    ReplyDelete
  11. ಹಾಯ್ ದೀಪಸ್ಮಿತ,

    ಪ್ರತಿಕ್ರಿಯೆಗೆ ವಂದನೆಗಳು :)

    ReplyDelete
  12. ಆಶಾವಾದ ಇರಲೇಬೇಕು. ಇಲ್ಲದಿದ್ದರೆ ಜೀವನ ಮುಳ್ಳಿನ ಹಾಸಿಗೆ. ಒಳ್ಳೆ ಕಥೆ.morel ಕೂಡ.

    ReplyDelete
  13. ಮಲ್ಲಿಕಾರ್ಜುನ್,

    ನನ್ನ ಬ್ಲಾಗಿಗೆ ಭೇಟಿ ಕೊಟ್ಟು ಪ್ರತಿಕ್ರಿಯಿಸಿದ್ದಕ್ಕೆ ವಂದನೆಗಳು.ಹೀಗೇ ಬರುತ್ತ ಇರಿ. :)

    ReplyDelete
  14. hahahaha... super aashavvadi katte....

    ReplyDelete
  15. ಹಹ! ಇನ್ನೊಂದು ಹಾಸ್ಯ ಎಂದರೆ, ಆ ಕತ್ತೆಗಿರೋ ಆಶಾವಾದ ಆ ಯಜಮಾನನಿಗಿಲ್ಲ. ;)

    ReplyDelete
  16. @ರವಿಕಾಂತರವರೆ,

    ಪ್ರತಿಕ್ರಿಯೆಗೆ ವಂದನೆಗಳು.

    @ಚಂದ್ರಿಕಾ,

    ನಮ್ಮಲ್ಲಿರೋ ಆಶಾವಾದ ಎಚ್ಚೆತ್ತುಕೊಳ್ಳೋದು ನಾವು ತೊಂದರೆ ಅನುಭವಿಸುವಾಗ ಮಾತ್ರ, ಅಲ್ಲವೇ :). ಪ್ರತಿಕ್ರಿಯೆಗೆ ವಂದನೆಗಳು.

    ReplyDelete